Header Ads Widget

Responsive Advertisement

ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಈ ಬೆಟ್ಟಗಳಲ್ಲಿಯೇ?


ಇಲ್ಲೊಂದು ಬುದ್ಧನ ಶಾಂತಿ ಸ್ತೂಪ,  
ಅನೇಕ ಶಿಲಾಲೇಖನಗಳು ಅಹಿಂಸೆ, ಶಾಂತಿ, ಮತ್ತು ನೀತಿಯ ಸಂದೇಶಗಳನ್ನು ಸಾರುತ್ತವೆಹಾಗಾದ್ರೆ  ಯಾವದು ಈ ಶಾಂತಿ ಸ್ತೂಪ ಅಂತೀರಾ ಇದೆ, ಧೌಲಿಗಿರಿ ಪಗೋಡ ಅಥವಾ ಶಾಂತಿ ಸ್ತೂಪ   ಒಡಿಶಾ ರಾಜಧಾನಿ  ಭುವನೇಶ್ವರದ ದಯಾ ನದಿಯ ದಡದಲ್ಲಿರುವ ಐತಿಹಾಸಿಕ ಸ್ಥಳ . 

ಮೌರ್ಯ ಚಕ್ರವರ್ತಿ ಅಶೋಕನಿಂದ ಕಳಿಂಗ ಯುದ್ಧವನ್ನು ಹೋರಾಡಿ ಗೆದ್ದ ಪ್ರದೇಶವೆ ಈ ಧೌಲಿ ಗಿರಿ 

ದಂತಕಥೆಯ ಪ್ರಕಾರ, ದಯಾ ನದಿಯ ನೀರು ಭಯಾನಕ ಕಳಿಂಗ ಯುದ್ಧದಲ್ಲಿ ಸತ್ತವರ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿತು. 

ಕಲಿಂಗ ಯುದ್ಧದ    ನಂತರ ಅಶೋಕನು  ಬೌದ್ಧ ಧರ್ಮವನ್ನು ಸ್ವೀಕರಿಸಿ, ಅಹಿಂಸೆ ಮತ್ತು ಶಾಂತಿಯ ಮೌಲ್ಯಗಳನ್ನು ಅಂಗೀಕರಿಸಿ ಧರ್ಮದ ಮಾರ್ಗವನ್ನು ಅಳವಡಿಸಿಕೊಂಡದ್ದು ಈ ಬೆಟ್ಟಗಳಲ್ಲಿಯೇ.

ಮೌರ್ಯ ಚಕ್ರವರ್ತಿ ಅಶೋಕನು ಧೌಲಿಗಿರಿಯನ್ನು ಪ್ರಸಿದ್ಧ ಬೌದ್ಧ ಕೇಂದ್ರವನ್ನಾಗಿ ಮಾಡಿದನು.  ಧೌಲಿಗಿರಿ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತ ಹಲವಾರು ಚೈತ್ಯಗಳು, ಸ್ತೂಪಗಳು ಮತ್ತು ಕಂಬಗಳನ್ನು ನಿರ್ಮಿಸಿದನು. ಧೌಲಿಗಿರಿಯಲ್ಲಿನ ಗಮನಾರ್ಹ ಸ್ಥಳಗಳೆಂದರೆ ಭವ್ಯವಾದ ಈ ಶಾಂತಿ ಸ್ತೂಪ ಮತ್ತು ಹಲವಾರು ಶಾಸನಗಳು.

ನೀವು ನೋಡುತ್ತಾ ಇರುವ ಈ ದೌಲಿಗಿರಿ ಶಾಂತಿ ಸ್ತೂಪವು 1972 ರಲ್ಲಿ ಬೌದ್ಧ ಸಂಘಗಳು ನಿರ್ಮಿಸಿದ ಬೌದ್ಧ ರಚನೆಯಾಗಿದೆ

Post a Comment

0 Comments