ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೇರೆಯ ಬಳಿ ಇರುವ ಶ್ರೀ ಕಾಮಧೇನು ಕ್ಷೇತ್ರ ಎಂದೇ ಪ್ರಸಿದ್ಧಿ ಹೊಂದಿರುವ ಪವಿತ್ರ ರಾಘವೇಂದ್ರ ಸ್ವಾಮಿ ದೇವಸ್ಥಾನ. ಈ ಕ್ಷೇತ್ರ "ಮಿನಿ ಮಂತ್ರಾಲಯ" ಎಂದೇ ಪ್ರಸಿದ್ಧಿ ಏಕೆಂದರೆ ಇಲ್ಲಿ ಮಂತ್ರಾಲಯದ ಅನುಭವವನ್ ಪಡೆಯಬಹುದು.
ಇಲ್ಲಿ ಮುಖ್ಯವಾಗಿ ನೀವು ನೋಡಬಹುದು ಭಕ್ತರು ತಮ್ಮ ಮನಸ್ಸಿನ ಹರಕೆಗಳನ್ನು ತಪ್ಪದ ದೀಪ ಸೇವೆ ಯ ರೂಪದಲ್ಲಿ ಗುರು ರಾಯರಿಗೆ ಅರ್ಪಿಸುತ್ತಿರುವುದು.
📚 ಲಕ್ಷಾಂತರ “ಶ್ರೀ ರಾಘವೇಂದ್ರಾಯ ನಮಃ” ಎಂಬ ನಾಮಲಿಖಿತ ಪುಸ್ತಕಗಳಿಂದ ನಿರ್ಮಿತ ವಾದ ಪುಸ್ತಕ ಬೃಂದಾವನ
🔱 ಶುದ್ಧ ಸಾಲಿಗ್ರಾಮ ಶಿಲೆಯಿಂದ ನಿರ್ಮಿತ ಭುವರಾಹಾ ಮುಖ್ಯಪ್ರಾಣ ಶ್ರೀ ರಾಘವೇಂದ್ರ ಸ್ವಾಮಿ ಯವರ ಬೃಂದಾವನ,
ಅನ್ನದಾನ ಸೇವೆ: ಗುರುವಾರ ಮತ್ತು ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಉಚಿತ ಅನ್ನದಾನ.
BMTC ಬಸ್ಗಳ ಮೂಲಕ ಸುಲಭವಾಗಿ ತಲುಪಬಹುದಾದ ಈ ಕ್ಷೇತ್ರ, ನಿಮ್ಮ ಆತ್ಮಶಕ್ತಿ ಹೆಚ್ಚಿಸುತ್ತದೆ.
🌟 ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್ನ್ನು ಫಾಲೋ ಮಾಡೋದನ್ನ ಮರೀಬೇಡಿ
📍 ಸ್ಥಳ: ವಡ್ಡರಹಳ್ಳಿ, ಕಡಬಗೇರೆ ಹೋಬಳಿ, ಬೆಂಗಳೂರು
🕉️ ದರ್ಶನದ ದಿನ: ಗುರುವಾರದಂದು ಭಕ್ತರ ಹೆಚ್ಚಿನ ಪ್ರವಾಹವಿರುತ್ತದೆ
ದೇವಾಲಯದ ಸಮಯಗಳು:
- ಸೋಮ–ಶುಕ್ರವಾರ: ಬೆಳಿಗ್ಗೆ 8:30 – ಸಂಜೆ 5:30
- ಭಾನುವಾರ: ಬೆಳಿಗ್ಗೆ 8:00 – ಸಂಜೆ 7:30
- ಗುರುವಾರ: ಬೆಳಿಗ್ಗೆ 6:30 – ರಾತ್ರಿ 8:30
🚌 ಮಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ)ದಿಂದ ಕಡಬಗೇರೆಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ BMTC ಬಸ್ ಮಾಹಿತಿ:
🛑 ಎಲ್ಲಿ ಹತ್ತಬೇಕು?
- ಪ್ಲಾಟ್ಫಾರ್ಮ್ 21 ರಿಂದ 24 (ಮಜೆಸ್ಟಿಕ್ನಲ್ಲಿ ಮಾಗಡಿ ರಸ್ತೆಯ ಕಡೆಗೆ ಹೋಗುವ ಬಸ್ಗಳು)
🚏 ಬಸ್ ಸಂಖ್ಯೆ:
- 245MA – ಕಡಬಗೇರಿ ಕ್ರಾಸ್ ಮೂಲಕ ಹೋಗುತ್ತದೆ
- 245G – ಜನಪ್ರಿಯ ಟೌನ್ಶಿಪ್ ಕಡೆ, ಕಡಬಗೇರಿ ಕ್ರಾಸ್ ಮೂಲಕ
- 242FB, 242B, 245Q, 245J, 245K – ಇವು ಕೂಡ ಕಡಬಗೇರಿ ಅಥವಾ ಹತ್ತಿರದ ಪ್ರದೇಶಗಳಿಗೆ ಹೋಗುವ ಬಸ್ಗಳು
🕒 245MA ಬಸ್ ಸಮಯ:
- ಬೆಳಿಗ್ಗೆ 10:55
- ಮಧ್ಯಾಹ್ನ 2:00
- ಸಂಜೆ 5:10
- ರಾತ್ರಿ 8:50
ದೂರ: ~25 ಕಿ.ಮೀ
ಪ್ರಯಾಣ ಸಮಯ: ಸುಮಾರು 1 ಗಂಟೆ 20 ನಿಮಿಷ
🛕 ಹತ್ತಿರದ ನಿಲ್ದಾಣ:
- ಕಡಬಗೇರಿ ಕ್ರಾಸ್ ಅಥವಾ ಗಣೇಶ ಸರ್ಕಲ್ (ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠವಿದೆ)
0 Comments